ಮಂಗಳವಾರ, ಸೆಪ್ಟೆಂಬರ್ 3, 2024

ಸ್ಟೋರಿ : "ದಿನಕ್ಕೊಂದು ಹೊಸ ಕಥೆಗಳು" ( ಒಡಕು ಕೊಡದ ಒಂದು ಆದರ್ಶ ಜೀವನ)


                                   "ಒಡಕು ಕೊಡದ ಒಂದು ಆದರ್ಶ ಬದಕು" 

                                    ಒಬ್ಬ  ಶ್ರೀಮಂತ ವ್ಯಕ್ತಿಯ ಮನೆಯಲ್ಲಿ ಒಬ್ಬ ಆಳಿದ್ದ.ಅವನ ಕೆಲಸವೆಂದರೆ, ಬಾವಿಯಿಂದ ನೀರನ್ನು ಸೇದಿ ತಂದು ಬಚ್ಚಲು ಮನೆಯಲ್ಲಿ ಹಂಡೆ, ತೊಟ್ಟಿಗಳಿಗೆ ನೀರನ್ನು ತುಂಬಿಸುವುದು.ಮನೆಯಲ್ಲಿ ಜನ ಜಾಸ್ತಿ ಇದ್ದುದರಿಂದ , ಅವನು  ಪದೇ ಪದೇ ಬಾವಿಯಿಂದ ನೀರು ಸೇದಿ ತರಬೇಕಾಗಿತ್ತು.ಆಗಿನ ಕಾಲದಲ್ಲಿ ಈಗಿನ ಹಾಗೆ ನಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ.ಅದಕ್ಕೆ ಅವನು ಒಂದು ಉದ್ದವಾದ ಕೋಲನ್ನು ಮಾಡಿಕೊಂಡು ,ಕೋಲಿನ ಎರಡೂ ತುದಿಗಳಿಗೆ, ಒಂದೊಂದು ಕೊಡವನ್ನು ಕಟ್ಟಿ , ಹೆಗೆಲ ಮೇಲೆ ಇಟ್ಟು ಕೊಂಡು  ಬಾವಿಯಿಂದ ನೀರು ತರುತ್ತಿದ್ದ. 

                                 ಎರಡು ಕೊಡಗಳಲ್ಲಿ,ಯಾವಾಗಲೋ ಒಂದು ಕೊಡದ ಬೆಸುಗೆ ಬಿಟ್ಟು ,ಕೊಡದಿಂದ ನೀರು ತರಲು ಶುರುವಾಯಿತು.ಇವನು‌ ಬಾವಿಯಿಂದ ನೀರು ತುಂಬಿಸಿ ಕೊಂಡು ಮನೆ ಮುಟ್ಟುವಷ್ಟರಲ್ಲಿ ಎಡ  ಬಾಗದ ಒಡೆದ ಕೊಡದಿಂದ   ನೀರು ಸೋರಿ ,ಕೇವಲ ಅರ್ಧ ಕೊಡದಷ್ಟು ನೀರು ಮಾತ್ರ  ಉಳಿಯುತ್ತಿತ್ತು, .ಹೀಗೇ ಎರಡು ವರ್ಷಗಳ ಕಾಲ ನಡೆಯಿತು  . ಅವನು ಯಾಕೋ ಕೊಡವನ್ನು ರಿಪೇರಿ ಮಾಡಿಸಲೂ ಇಲ್ಲಾ, ಬೇರೆ ಕೊಡವನ್ನೂ ತೆಗೆದುಕೊಳ್ಳಲ್ಲಿಲ್ಲ.

                                   ಒಡೆದ ಕೊಡಕ್ಕೆ ಬಹಳ ಬೇಜಾರಾಗುತ್ತಿತ್ತು, ಪಾಪ ಅವನು ಇಷ್ಟು ಕಷ್ಟಪಟ್ಟು  ಹೊತ್ತಿಕೊಂಡು,ಮನೆ ಮುಟ್ಟುವುದರಲ್ಲೇ,ಅರ್ಧ ಖಾಲಿಯಾಗಿ ಬಿಡುತ್ತೇನಲ್ಲಾ , ಅವನ ಶ್ರಮವೆಲ್ಲಾ ವ್ಯರ್ಥವಾಗುತ್ತಿದೆ ಎಂದು ದುಃಖ ಪಟ್ಟಿತು. .ಒಂದು ದಿನ ಅವನನ್ನು ಕೇಳಿತು , ನನಗೆ  ನನ್ನ ಬಗ್ಗೆಯೇ ಬೇಸರವಾಗುತ್ತಿದೆ,ನನ್ನ ಅಸಹಾಯಕತೆ ಬಗ್ಗೆ ಜಿಗುಪ್ಸೆಯಾಗುತ್ತಿದೆ.ನನ್ನನ್ನು ದಯವಿಟ್ಟು ಕ್ಷಮಿಸು ಎಂದಿತು. ಆಗ ಅವನು ನೀನು  ಹಾಗೇಕೆ ಹೇಳುತ್ತಿ? ಎಂದು ಕೇಳಿದ. ಆಗ ಒಡಕು ಕೊಡಾ ಹೇಳಿತು, ಬಾವಿಯಲ್ಲಿ , ನೀರು ತುಂಬುವಾಗ  ಪೂರ್ತಿಯಾಗೇ , ಇರುತ್ತೇನೆ,ಆದರೆ ಮನೆ ತಲುಪುವಾಗ ಅರ್ಧವಾಗಿರುತ್ತೇನೆ.ಇನ್ನೊಂದು ಕೊಡದಿಂದ ಒಂದು ಹನಿ ನೀರೂ ಕೊಡಾ,ಕಡಿಮೆಯಾಗಿರುವುದಿಲ್ಲ, ನಾನು ಮಾತ್ರ ಅರ್ಧಕ್ಕರ್ಧ ನೀರನ್ನು ಹೊರಗೆ ಸೋರಿಸಿ ಬಿಡುತ್ತೇನೆ, ಇದರಿಂದಾಗಿ ನಿನಗೆ ಶ್ರಮ ಹೆಚ್ಚಾಗುತ್ತದೆ.ನಾನೇನು ಮಾಡಲಿ ? ನಾನು ಸೋರು ಕೊಡವಾಗೇ ಉಳಿದುಬಿಟ್ಟೆ,ನೀನು ಬೇರೊಂದು ಕೊಡವನ್ನು ತೆಗೆದುಕೊ ಎಂದು ದುಃಖಿಸಿತು.

                                  ಆಗ ಅವನು ನಗುತ್ತಾ ಹೇಳಿದ, ನೀನು ಒಂದು ಕೆಲಸ ಮಾಡು,ನಾಳೆ  ಬೆಳಗ್ಗೆ ನಾನು  ನೀರು ತರಲು ಹೋಗುವಾಗ , ಎಚ್ಚರದಿಂದ ,ಎಡ ಬಲದ ಸ್ಥಳಗಳನ್ನು ಗಮನಿಸು.ಆಮೇಲೆ ನಿನಗೊಂದು ವಿಷಯ ಹೇಳುತ್ತೇನೆ ,ಎಂದ.ಒಡಕು ಕೊಡ,ತಲೆ ಅಲ್ಲಾಡಿಸಿತು.

                                  ಮರುದಿನ ಬೆಳಿಗ್ಗೆ ‌ನೀರುತರಲು ಬಾವಿಗೆ ಹೊರಟಾಗ ಒಡಕು ಕೊಡ ಕಣ್ಣರಳಿಸಿ ನೋಡುತ್ತಿತ್ತು.ತನ್ನ‌ ಬದಿಯ  ನೆಲದಲ್ಲಿ ಹುಲ್ಲು ಒಣಗಿ ಹೋಗಿದೆ, ಆದರೆ ಇನ್ನೊಂದು ಬದಿಯಲ್ಲಿ ,ಹೂವಿನ ಗಿಡಗಳ ಸಾಲು ಸಾಲು.ಅಲ್ಲಿ ಅನೇಕ ಬಣ್ಣ ಬಣ್ಣದ ಹೂಗಳು ಅರಳಿ ನಗುತ್ತಿವೆ.ಬಾವಿ ತಲುಪಿದಾಗ ಅವನು  ಒಡಕು ಕೊಡವನ್ನು ಕೇಳಿದ, ಏನಾದರೂ ಗಮನಿಸಿದೆಯಾ, ಎಂದು.ಅದು ಹೇಳಿತು, ಹಾಂ, , ಗಮನಿಸಿದೆ, ನನ್ನ ಬದಿಯಲ್ಲಿ ಹುಲ್ಲು ಕೊಡಾ ಒಣಗಿದೆ, ಆದರೆ ಆಚೆ ಬದಿಯಲ್ಲಿ, ಚೆಂದ ಚೆಂದದ ಹೂಗಳು ಸಾಲೇ ಇದೆ, ಅಲ್ಲೂ ನನ್ನ ಅದೃಷ್ಟ ನೋಡು, ಎಂದಿತು ಬೇಸರದಿಂದ. ಹೌದು ನೀನು ಸರಿಯಾಗಿಯೇ ಗಮನಿಸಿದ್ದಿ,ಈಗ ವಾಪಾಸ್ಸು ಹೋಗುವಾಗ ನೋಡುವಿಯಂತೆ, ಎಂದು ನೀರನ್ನು ತುಂಬಿಸಿ ,ಮನೆ ಕಡೆಗೆ ಹೊರಟು,ನೋಡು,ಈ ಚೆಂದದ  ಹೂವಿನ ಗಿಡಗಳ ಸಾಲನ್ನು ಇದೆಲ್ಲಾ  ನಿನ್ನಿಂದಲೇ ಬಂದಿದ್ದು ಗೊತ್ತೇನು,ಎಂದ.ಅದು ನಿನ್ನಿಂದ ಬಂದದ್ದೇ,ಅದು ಹೇಗೆ ,ಎಂದು ಕುತೂಹಲದಿಂದ  ಕೇಳಿತು.ನಿನ್ನ ಒಂದು ಭಾಗದಲ್ಲಿ ಒಡಕಿದೆ ಎಂದು ಗೊತ್ತಾದಾಗ , ನೀನು ಬರುವ ದಾರಿಯಲ್ಲಿ ,ಹೂವಿನ ಬೀಜಗಳನ್ನು ಹಾಕಿಬಿಟ್ಟೆ,ನಿನ್ನ ಒಡಕಿನಿಂದ ಸೋರಿದ ನೀರು‌ ಅವುಗಳ ಮೇಲೆ ಬಿದ್ದು ,ಬೀಜಗಳು ಚಿಗುರಿ, ಗಿಡವಾಗಿ,ಹೂ ಬಿಟ್ಟವು. ಇವುಗಳೆಲ್ಲಾ  ನಿನ್ನ  ಸೋರಿಕೆ ನೀರಿನ  ಕೊಡುಗೆ.ಯಜಮಾನರ  ಮನೆಯನ್ನು ಸುಂದರಗೊಳಿಸುವ ಹೂಗಳು ಇವೇ. ನಿನ್ನ ಒಡಕಿನ ಬಗ್ಗೆ ಕೊರಗದಿರು.ಅದರಿಂದ ಎಷ್ಟು ಉಪಯೋಗವಾಯಿತು ಎಂಬುದನ್ನು ಮಾತ್ರ ಗಮನಿಸಿ,ಸಂತೋಷಪಡು ಎಂದು ಹೇಳಿದ.

                              ಕೊಡಕ್ಕೆ ತೃಪ್ತಿಯಾಗಿ, ತಾನು ಒಡಕು ಎನ್ನುವುದನ್ನು ಮೆರೆಯಿತು. 

                               ನಮ್ಮಲ್ಲೂ ಕೂಡಾ  ಒಡಕು ಕೊಡದ ಹಾಗೆ   ಏನಾದರೂ ನ್ಯೂನತೆ,ಕುಂದು ಕೊರತೆಗಳು ಇದ್ದೇ, ಇರುತ್ತವೆ.ಅದರಿಂದ ಖಿನ್ನತೆಗೆ ಒಳಗಾಗದೇ, ನಮ್ಮ ಚೈತನ್ಯವನ್ನು ,ಸೋರಿ ಹೋಗಲು ಬಿಡದೇ,ಯಾವುದಾದರೂ ಒಳ್ಳೆಯ ಕೆಲಸ  ಕಾರ್ಯಗಳಿಗೆ ,ಉಪಯೋಗಿಸಿ  ಕೊಂಡರೆ, ನಮ್ಮ ಮನಸ್ಸಿಗೂ ತೃಪ್ತಿ, ಹಾಗೂ ಬೇರೆಯವರಿಗೂ  ಅನುಕೂಲವಾಗುತ್ತದೆ.

 " ಪ್ರತಿಯೊಂದು ವಸ್ತು, ವ್ಯಕ್ತಿಗಳು ಕೊಡ ಒಂದಲ್ಲ ಒಂದು ದಿನ ಯಾವುದು ರೊಪದಲ್ಲಿ ಉಪಯೋಗಕ್ಕೆ ಬರತ್ತಾರೆ ಆದ್ದರಿಂದ ಯಾರನ್ನು ಕಡೆಗಾಣಿಸಬೇಡಿ "                                   ‌                      

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಮಸ್ಸೆಗಳಿದ್ದರೆ , ನೇರವಾಗಿ ವಿಚಾರಿಸಿ, ಸಲಹೆಗಳು ನೀಡಿ.

ನಿತ್ಯದ ನ್ಯೂಸ್ , ನೂಟ್ಸ ಮತ್ತು ಜ್ಞಾನ ಕನ್ನಡದಲ್ಲಿ....!

FlipKart ಕಂಪನಿ- ಭಾರತೀಯ ಇ-ಕಾಮರ್ಸ್ ಉದ್ಯಮದಲ್ಲಿ 48% ಮಾರುಕಟ್ಟೆಯೇ ಪಾಲುದಾರ- "ಫ್ಲಿಪ್‌ಕಾರ್ಟ್ ಪ್ರೈವೇಟ್ ಲಿಮಿಟೆಡ್"

           "ಫ್ಲಿಪ್‌ಕಾರ್ಟ್ ಪ್ರೈವೇಟ್ ಲಿಮಿಟೆಡ್   ಸಚಿನ್ ಬನ್ಸಾಲ್  ಮತ್ತು  ಬಿನ್ನಿ ಬನ್ಸಾಲ್ * ಸ್ಥಾಪಕರು : ಸಚಿನ್ ಬನ್ಸಾಲ್  ಮತ್ತು  ಬಿನ್ನಿ ಬನ್ಸಾಲ್  (...